ಹಾಸನದ ವಿದ್ಯಾ ಸೌಧ ಪದವಿಪೂರ್ವ ಕಾಲೇಜುನಲ್ಲಿ ಭಾರತ ಸಂವಿಧಾನ ದಿನವನ್ನು ದಿನಾಂಕ ೨೬-೧೧-೨೦೨೦ ರ ಗುರುವಾರದಂದು ಆಚರಿಸಲಾಯಿತು. ಈ ಸುಸಂದರ್ಭದಲ್ಲಿ ಪ್ರಾಂಶುಪಾಲರಾದ ಶ್ರೀಯುತ ಗೋಪಿನಾಥ್ ರವರು ತಮ್ಮ ಎಲ್ಲ ಸಿಬ್ಬಂದಿಗಳೊಂದಿಗೆ ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಓದಿ ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಭಾರತದ ಸಂವಿಧಾನ ದಿನವನ್ನು ಸಾಂಕೇತಿಕವಾಗಿ ಆಚರಿಸಲಾಯಿತು.