For Admissions: 88808 64000

enquiry@vidyasoudha.edu.in

Kannada Rajyotsava and Children’s Day Celebration

“ಕಲಿತವರಿಗೆ ಅಮೃತ,  ನೆನೆದವರಿಗೆ ನೆರಳು, ಅಂಧರಿಗೆ ದಾರಿದೀಪ,  ಅಪ್ಪಿಕೋ ಕನ್ನಡವ” ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

 ಬಾಲ್ಯದ ದಿನಗಳೇ ಜೀವನದ ಸವಿನೆನಪುಗಳು ಆ ಬಾಲ್ಯದ ನೆನಪಿನೊಂದಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು.

 67ನೇ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಅಂಗವಾಗಿ ವಿದ್ಯಾಸೌಧ ಶಾಲೆಯ ಆವರಣದಲ್ಲಿ ಸಂಭ್ರಮ ಮನೆ ಮಾಡಿದ್ದು,  ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರ ವತಿಯಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

   ಈ ಸಂದರ್ಭದಲ್ಲಿ ವಿದ್ಯಾಸೌಧ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ರಂಗೇಗೌಡ ಸರ್,  ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ವಾಣಿ ಸತೀಶ್ ಮೇಡಂ, ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಮಮತಾ ನಟೇಶ್ ಮೇಡಂ ರವರು ಆಗಮಿಸಿದ್ದು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಶುಭಾಶಯ ಕೋರಿದರು ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು.

Admission Enquiry

Thank you!

Download the 2023-24 E-Prospectus